ಬುಧವಾರ, ಡಿಸೆಂಬರ್ 6, 2017

’ಹೂ ಬಿಟ್ಟ ಮರ.. ಎದೆಯ ತುಂಬ ಚಿಟ್ಟೆ ಸಾಲು’

ಪದ್ಯವಾಗಿಸಲು ಹೋದ ಪದಗಳೆಲ್ಲಾ ಗದ್ಯಗಳಾಗಿಬಿಡುತ್ತವೆ
ಅದೇಕೋ ಕವಿತೆ ಮುನಿಸು ತೋರಿ ದೂರ ನಿಂತುಬಿಟ್ಟಿದೆ ನನ್ನಿಂದ
ಕಾವ್ಯವೆಲ್ಲಾ ಕಥೆಗಳಾಗಿಬಿಟ್ಟಿವೆ!
ಪ್ರಾಸ. ಲಯ-ಲವಲವಿಕೆ ಯಾವುದೂ ಘಟಿಸುತ್ತಲೇ ಇಲ್ಲ..
ಗರಿಗಳಷ್ಟು ಹಗುರವಾಗಿಮಂಜಿನಷ್ಟು ಬಿಳುಪಾಗಿ ಕವಿತೆ ಹೊಮ್ಮಬೇಕಿತ್ತು.
ಹೊಗೆಯಷ್ಟು ದಟ್ಟವಾಗಿಬೆಳಕಿನಷ್ಟು ತೀವ್ರವಾಗಿ ಕಥನ ಹಬ್ಬುತ್ತದೆ!
ಉಸಿರಾದಲು ಕಷ್ಟವಾಗುವಷ್ಟು ಗಟ್ಟಿಯಾಗಿಬಿಡಿಸಿಕೊಳ್ಳಲು ಸಾಧ್ಯವಾಗದಷ್ಟು ಬಿಗಿಯಾಗಿಕವಿತೆ ಒಮ್ಮೆ ತಬ್ಬಿಬಿಡಬೇಕು ನನ್ನ:)
            ಕವಿತೆಗಳ ಮೇಲೆ ಹೀಗೊಂದು ತೀವ್ರತರವಾದ ಪ್ರೀತಿ ಉಕ್ಕುವಂತೆ ಮಾಡಿದ್ದು ಕೃಷ್ಣರವರ ಕವಿತೆಗಳು.  ಮತ್ತೆ ಮತ್ತೆ ಹುಟ್ಟುತ್ತೇನೆಚಿತ್ರವಾಗಿ ಕಾಡುತ್ತೇನೆ ಎನುತ್ತಲೇ ಸಾಲುಗಳು ನಮ್ಮನಾವರಿಸಿಕೊಂಡುಬಿಡುತ್ತವೆ ಹಾಗೂ ಕಾಡುತ್ತಲೇ ಹೋಗುತ್ತವೆ. ಹೂ ಹುಡುಗಿಯೆಂಬ ಸಂಭೋದನೆಯೇ ಇನ್ನಷ್ಟು ಮತ್ತಷ್ಟು ಆಪ್ತವಾಗಿಸುತ್ತವೆ. ಚಿತ್ರಗಳ ನಂತರ ಪದಗಳು ಮೂಡುತ್ತವೆಯೋಪದಗಳ ಜೊತೆಜೊತೆಗೇ ರೇಖೆಗಳು ರೂಪು ತಳೆಯುತ್ತವೆಯೋ ಎಂಬುದೊಂದು ಅನುಮಾನ ನನ್ನೊಳಗೆ. ಒಮ್ಮೆ ಕನ್ನಡಿಯೊಳಗೆ ಹೂ ಬಿಟ್ಟ ಕನಸ ಮರಮತ್ತೊಮ್ಮೆ ಒಲೆಯುರಿಯ ನಿಗಿನಿಗಿ ಕೆಂಡದಂಥಾ ವಾಸ್ತವಮಗದೊಮ್ಮೆ ಬಾಚಿತಬ್ಬಿಬಿಡೋಣ ಎನ್ನುವಂಥಾ ಮೃದುಲ ಭಾವಗಳು. ಕೃಷ್ಣರ ಚಿತ್ರಕಾವ್ಯದ ಕಡಲಿನ ಪ್ರತಿಹನಿಯೂ ಎದೆಯ ಚಿಪ್ಪಿನಲ್ಲಿ ಮುತ್ತಾಗುವಂಥವುಗಳೇ.. :)
            ಕೃಷ್ಣರ ವ್ಯಕ್ತಿತ್ವ ಆಕರ್ಷಿಸಿದಷ್ಟೇ ಕವಿತೆಗಳು ಸೂಜಿಗಲ್ಲಿನಂತೆ ಸೆಳೆದಿವೆ ನನ್ನನ್ನು. ಮನದ ಆಕಾಶದಲ್ಲಿ ಅಗಾಧ ಮೌನವನ್ನುಅನಂತ ಪ್ರೇಮವನ್ನೂಅವ್ಯಕ್ತ ನೋವುಗಳನ್ನೂ ಸೃಷ್ಟಿಸುವ ಶಕ್ತಿ ಈ ನಕ್ಷತ್ರದ ಹೊಳಪಿರುವ ಕವಿತೆಗಳಿಗಿದೆ. ಕಾವ್ಯ ಪ್ರಪಂಚಕ್ಕಿರುವ ಸಂಪೂರ್ಣ ಸ್ವಾತಂತ್ರ್ಯವನ್ನು ತನ್ನೆಡೆಗೆ ಎಳೆದುಕೊಂಡು,ಅದ್ಭುತವೆನಿಸೋ ಪದಗಲನ್ನು ಪೋಣಿಸಿ ನಮ್ಮೆದುರಿಟ್ಟು ’ಇದು ಹೇಗಿದೆ ಹೇಳಿ..’ ಎನ್ನುವ ಕೃಷ್ಣರ ದನಿಯಲ್ಲಿ ಆಳವಾದ ಜೀವನಪ್ರೀತಿ ಮತ್ತು ನನ್ನ ಕಂಗಳಲ್ಲಿ ಮುಗಿಯದ ಬೆರಗು. ಕಟ್ಟುಪಾಡು ಎಂತನಿಸುವ ಎಲ್ಲದರಿಂದಲೂ ದೂರವೇ ಉಳಿಯುವುದರಿಂದಲೇ ಏನೋ ಬೇಲಿಯಾಚೆಗಿನ ಭಾವಗಳೆಲ್ಲಾ ಚುಕ್ಕಿಗಳಾಗಿ, ಚಿತ್ರಗಳಾಗಿ,ಪದ್ಯಗಳಾಗಿ ಕೃಷ್ಣರಿಗೆ ದಕ್ಕಿಬಿಡುತ್ತವೆ.
            ಅರಮನೆಯೊಳಗಿನ ಜೋಳಿಗೆಯಲ್ಲಿ ಬುದ್ಧನೆಂಬ ಅಗುಲನ್ನು ಹುಡುಕುವಾಗಹೊಸ್ತಿಲ ಬಳಿ ನಿಂತ ಯಶೋಧರೆಯ ಕನವರಿಕೆಗಳು ಕದ ತಟ್ಟುತ್ತವೆ. ಅವ್ವನ ಬುತ್ತಿಗಂಟಿನೊಂದಿಗೆ ಲಂಕೇಶರನ್ನು ನೆನೆವ ಹೊತ್ತಿಗೆ ಕಿಟಕಿಯಾಚೆಗಿನ ವಿಸ್ಮಯ ಲೋಕದ ಬಾಗಿಲು ತೆರೆದು ತೇಜಸ್ವಿ ಒಳಬಂದಿರುತ್ತಾರೆ. ’ಹೂ ಬಿಟ್ಟ ಮರ.. ಎದೆಯ ತುಂಬ ಚಿಟ್ಟೆ ಸಾಲು’ ಎನ್ನುವಲ್ಲಿ ಮೂಡುವ ನವಿರು ಭಾವ’ಮನ ತುಂಬಿದಳು ಹಾರಿಬಿಟ್ಟೆ.. ರೇಖೆಗಳಂತೆ ಹರಡಿಬಿಟ್ಟೆ’ ಎನ್ನುವಷ್ಟರಲ್ಲಿ ಪ್ರೀತಿಯಾಗಿ ಹಬ್ಬಿನಿಲ್ಲುತ್ತದೆ. ’ಹಕ್ಕಿಗಳಿಗೆ ಬೇಕಂತೆ ಸೂರು.. ಕೊಟ್ಟು ಬಿಡೋಣ ಈ ಬೆಂಗಳೂರು’ ಇಂಥಾ ಸಾಲುಗಳು ಮನ ಕಲುಕುವ ರೀತಿಯನ್ನುಅವು ಮೂಡಿಸುವ ಕಂಪನಗಳನ್ನು ಪದಗಳಲ್ಲಿ ವ್ಯಕ್ತಪಡಿಸುವುದು ನನ್ನಿಂದ ಅಸಾಧ್ಯ.
            ಚುಕ್ಕೆಹಾಡು ಅಂತೆಲ್ಲ ಅನಿಸಿದ್ದ ಇವರ ಚಿತ್ರಕಾವ್ಯಲೋಕ ಈಗ ಶಬ್ಧದಾಚೆಯ ಕನವರಿಕೆಗಳು.. ಭಾವಕೋಶದ ಭಿತ್ತಿಯ ಮೇಲೆ ಸಹಸ್ರ ವರ್ಣಗಳು..

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ